ವಾರಪತ್ರಿಕೆಗಳು
ಚಾಣಕ್ಯನ ಹದಿನಾರು ಉಕ್ತಿಗಳು
ಸಹೃದಯ ಗೋಷ್ಠಿಯಲ್ಲಿ "ಪು.ತಿ.ನ. ಅವರ ಕಾವ್ಯಗಳ ರಸಯಾತ್ರೆ"!!!
-ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫ಼ೋರ್ನಿಯ.
ಸಹೃದಯ ಗೋಷ್ಠಿ ಹಮ್ಮಿಕೊಂಡಿದ್ದು, ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಪರೂಪ ಮತ್ತು ಅನುರೂಪ ದಂಪತಿಗಳಾದ, ಅಲಮೇಲು ಮತ್ತು ತಿರುನಾರಾಯಣ ಐಯ್ಂಗಾರ್ ಅವರು. ಸಾಹಿತ್ಯಾಸಕ್ತರೂ, ಸ್ವತಃ ಕವಿಗಳೂ ಆದ ಈ ದಂಪತಿಗಳು ಸರಟೋಗಾದಲ್ಲಿರುವ ಅವರ ಸುಂದರವಾದ ಸ್ವಗೃಹದಲ್ಲಿ ಈ ಗೋಷ್ಠಿಯನ್ನು ಜುಲೈ ೨೬ ರ ಶನಿವಾರ ಸಂಜೆ ಏರ್ಪಡಿಸಿದ್ದರು. ಈ ಗೋಷ್ಠಿಯ ಇನ್ನೊಂದು ವಿಶೇಷತೆ ಏನೆಂದರೆ, ಪು ತಿ ನ ಅವರೇ ಈ ವೇದಿಕೆ ಮೇಲೆ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳು, ಡಾ. ಜಿ.ಎಸ್. ಶಿವರುದ್ರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.
ಬರಿ ಓಳು !
-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
ಹೇಗೆ ಬರಲಿ...
- ಗುರು ಬಬ್ಬಿಗದ್ದೆ
ಮಾವ ನಿನ್ನ ಮನೆಗೆ, ಅಳಿಯನಾಗಿ ಬರಲೇ
ಮಗನಾಗಿ ಬರಲೇ, ಬೆಳಕಾಗಿ ಬರಲೇ
ನಿನ್ನ ಮಗಳ ಮೇಲೆ ಒಲವಾಗಿ ಬರಲೇ
ನದಿಯಾಗಿ ಬರಲೇ, ಪ್ರೀತಿ ಅಲೆಯನ್ನು ತರಲೇ ೧
ಮಿಕ
-ಅಬ್ದುಲ್ ಹಮೀದ್ ಪಕ್ಕಲಡ್ಕ
(ಇತ್ತೀಚೆಗೆ ಪ್ರಕಟವಾದ ಬಿಳಿಗೋಡೆ ಕಥಾಸಂಕಲನದಿಂದ ಆಯ್ದ ಕಥೆ)
’ವಿದ್ಯಾಧರ ವಿನಯ ಕುಮಾರ ಅರಸಿನ ಕಟ್ಟೆ, ಒಳಗೆ ಬನ್ನಿ’
ಕರೆ ಬಂದೊಡನೆ ಎದ್ದು ನಿಂತ ವಿನಯ, ಇಂಟರ್ವ್ಯೂಗೆ ಬಂದ ಅಭ್ಯರ್ಥಿಗಳತ್ತ ಒಮ್ಮೆ ಕಣ್ಣು ಹಾಯಿಸಿ ಕರೆಬಂದ ರೂಮಿನತ್ತ ತೆರಳಿದ.   ಪೂರ್ತಿ ಓದಿ... »
ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬಾಯಿಲ್ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).   ಪೂರ್ತಿ ಓದಿ... »
ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೩
-ಡಾ. ಬಿ.ಆರ್. ಸತ್ಯನಾರಾಯಣ
ಕಳೆದ ವಾರದಿಂದ ಮುಂದುವರೆದ ಭಾಗ...
ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ಹದಿನೈದು ನಿಮಿಷ ಬಿಟ್ಟುಕೊಂಡು ಬಾ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ಥ್ಯಾಂಕ್ಸ್ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.   ಪೂರ್ತಿ ಓದಿ... »
ನೀರಿನ ಮೇಲೆ ತೇಲುವ ಕಾರು ಪಾರ್ಕಿಂಗ್ ವ್ಯವಸ್ಥೆ
-ಅರ್ಶದ್ ಹುಸೇನ್ ಎಂ.ಹೆಚ್, ಶಾರ್ಜಾ
ನಗರಗಳು ಬೆಳೆದಂತೆ ಕಾರುಗಳ ಸಂಖ್ಯೆಯಲ್ಲಿ ಹೆಚ್ಚಳವೂ ಸಹಜ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪಾರ್ಕ್ ಮಾಡುವುದು ಎಲ್ಲಿ ಎಂಬ ಸಮಸ್ಯೆ ವಿಶ್ವದ ಎಲ್ಲಾ ಪ್ರಮುಖ ನಗರಗಳನ್ನು ಕಾಡುತ್ತಿದೆ. ಹಲವು ನಗರಗಳು ಹಲವು ಕಟ್ಟಡಗಳನ್ನು ಕಟ್ಟಿವೆ. ಇಂದಿನ ವರದಿಯ ಪ್ರಕಾರ ಶಾರ್ಜಾದಲ್ಲಿ ಏಳು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ಅಬುಧಾಬಿ, ದುಬೈಗಳಲ್ಲೂ ಕಾರು ಪಾರ್ಕಿಂಗಿಗಳಿಗೆಂದೇ ವಿಶೇಷ ಕಟ್ಟಡಗಳಿವೆ. ಆದರೆ ಆ ಕಟ್ಟಡ ಕಟ್ಟಲಿಕ್ಕೂ ಸ್ಥಳವಿಲ್ಲದಿದ್ದರೆ?   ಪೂರ್ತಿ ಓದಿ... »
ಊರ್ಧ್ವಮುಖಿ
-ಮಹೇಶ್
ಊರ್ಧ್ವಮುಖಿ
ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ.   ಪೂರ್ತಿ ಓದಿ... »
ಸಮಾಜ ಸೇವೆ ಅತ್ಯಗತ್ಯ ಏಕೆ?
ಪ್ರಪಂಚ ಈಗಾಗಲೆ ಆರ್ಥಿಕ ರೀತಿಯ ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ ಹಾಗೂ ಮುಂದುವರೆಯುತ್ತಲೇ ಇದೆ. ಕಾರಣ ಮಾನವ ಪ್ರಕೃತಿದತ್ತವಾಗಿ ದೊರೆಯುವ ಎಲ್ಲಾ ವಸ್ತುಗಳನ್ನು ಉಪಯೋಗಿಸಿ ತಾನು ಸುಖ ಸಂತೋಷಗಳನ್ನು ಅನುಭವಿಸಿ ನೆಮ್ಮದಿಯಿಂದ ಇರಬೇಕೆಂದು ತನ್ನ ಎಲ್ಲಾ ಚೇತನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಹೆಚ್ಚು ಹೆಚ್ಚು ದುಡಿಯುತ್ತ ಅದರಲ್ಲಿ ಅಭಿವೃದ್ಧಿ ಹೊಂದುತ್ತಾ, ಇಂದಿಗೂ ಕೂಡ ತನ್ನ ಪೀಳಿಗೆಯನ್ನು ಸಹ ಇದೇ ದುಡಿಮೆಯಲ್ಲಿ ತೊಡಗಿಸಿ ಮಾನವ ಶ್ರಮಿಸುತ್ತಿದ್ದಾನೆ.   ಪೂರ್ತಿ ಓದಿ... »
ಇಪ್ಪತ್ತಮೂರು ವರ್ಷಗಳ ಬಳಿಕ ಹಿಂದೆ ಸಿಕ್ಕ ಬಾಟಲಿ ಸಂದೇಶ
-ಅರ್ಶದ್ ಹುಸೇನ್ ಎಂ.ಹೆಚ್
1985ರಲ್ಲಿ ಸ್ಕಾಟ್ಲೆಂಡಿನ ಆರ್ಕೆನೀಯ ಡಿಯರ್ನೆಸ್ ಎಂಬ ಸಮುದ್ರತೀರದಲ್ಲಿ ವೈಲೀ ಡೋನಾಲ್ಡ್ ಎಂಬ ಹನ್ನೊಂದು ವರ್ಷದ ಹುಡುಗನೊಬ್ಬ ಒಂದು ಬಾಟಲಿಯಲ್ಲಿ ಸಂದೇಶನ್ನು ಬರೆದ ಚೀಟಿಯನ್ನಿಟ್ಟು ಸಮುದ್ರಕ್ಕೆಸೆದಿದ್ದ.   ಪೂರ್ತಿ ಓದಿ... »
ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೨
ಕಳೆದ ವಾರದಿಂದ ಮುಂದುವರೆದ ಭಾಗ...
ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು.   ಪೂರ್ತಿ ಓದಿ... »
ಮಧುಕರ ವೃತ್ತಿ
ಇತ್ತೀಚೆಗಂತೂ ವಾರಾಂತ್ಯದಲ್ಲಿ ಬೇಬೀ ಶವರ್ರು, ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ಮಕ್ಕಳ ಹುಟ್ಟುಹಬ್ಬ ಅಂತ ಒಂದಲ್ಲಾ ಒಂದು ಪಾರ್ಟಿ ಇದ್ದೇ ಇರುತ್ತೆ. ಇಂತಹ ಹಲವು ಪಾರ್ಟಿಗಳಿಗೆ ಹೋಗಿ ಬಂದ ಮೇಲೆ ನನಗೆ ನಾನೇ ಒಂದು ಹೋಮ್ ವರ್ಕ್ ಮಾಡಿಕೊಂಡಿದ್ದೇನೆ.   ಪೂರ್ತಿ ಓದಿ... »
