ಹರಿದಾಸ ಸಂಪದ
ಬೇವು ಬೆಲ್ಲದೊಳಿಡಲೇನು ಫಲ
(ರಾಗ ಬೇಹಾಗ್ ಆದಿತಾಳ)
ಬೇವು ಬೆಲ್ಲದೊಳಿಡಲೇನು ಫಲ ?
ಹವಿಗೆ ಹಾಲೆರೆದೇನು ಫಲ ? ||ಪ||
ಕುಟಿಲವ ಬಿಡದಿಹ ಕುಜನರು ಮಂತ್ರದ
ಪಠನವ ಮಾಡಿದರೇನು ಫಲ ? |
ಸಟೆಯನ್ನಾಡುವ ಮನುಜರು ಮನದಲಿ
ವಿಠಲನ ನೆನೆದರೇನು ಫಲ? ||
ಕಪಟತನದಿ ವಂಚಿಸುವ ಮನುಜರು
ಜಪಗಳ ಮಾಡಿದರೇನು ಫಲ? | ಮುಂದೆ ಓದಿ »
ದೇವ ಬಂದ ನಮ್ಮ ಸ್ವಾಮಿ ಬಂದನೋ
( ರಾಗ ಶಂಕರಾಭರಣ ಆದಿತಾಳ)
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ||ಪ||
ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ ||
ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ ||
ಪೂತನಿ ಸಂಹರಣ ಬಂದ ಪುರುಹೂತವಂದ್ಯ ಬಂದ ಮುಂದೆ ಓದಿ »
ಏನು ಧನ್ಯಳೋ ಲಕುಮಿ
(ರಾಗ ತೋಡಿ ಅಟತಾಳ)
ಏನು ಧನ್ಯಳೋ ಲಕುಮಿ
ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳೋ ||ಪ|
ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಮಾಡಿ
ಪೂರ್ಣನೋಟದಿಂದ ಸುಖಿಸುತಿಹಳೋ || ೧||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು ಮುಂದೆ ಓದಿ »
ಯಾದವ ನೀ ಬಾ
(ರಾಗ ಕಾಂಭೋಜ ಏಕತಾಳ)
ಯಾದವ ನೀ ಬಾ ಯದುಕುಲನಂದನ |
ಮಾಧವ ಮಧುಸೂಧನ ಬಾರೋ ||
ಸೋದರ ಮಾವನ ಮಧುರೆಲಿ ಮಡುಹಿದ ಯ-
ಶೋದೆಕಂದ ನೀ ಬಾರೋ || ಪ||
ಶಂಖಚಕ್ರವು ಕೈಯಲಿ ಹೊಳೆಯುತ |
ಬಿಂಕದ ಗೋವಳ ನೀ ಬಾರೋ ||
ಅಕಳಂಕಮಹಿಮನೆ ಆದಿನಾರಾಯಣ |
ಬೇಕೆಂಬ ಭಕುತರಿಗೊಲಿಬಾರೋ || ೧|| ಮುಂದೆ ಓದಿ »
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
(ರಾಗ ಕಾಂಭೋಜ ತ್ರಿಪುಟತಾಳ)
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ||
ಕಷ್ಟಗಳೆಲ್ಲಾ ಪರಿಹರಿಸಿ ಮನ-
ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ||
ಮಸ್ತಕದಲಿ ಮಾಣಿಕ್ಯದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆ ನೋಟ ಮುಂದೆ ಓದಿ »
ಅಳುವೊದ್ಯಾತಕೊ ರಂಗ
ರಾಗ: ಭೈರವಿ ಆದಿ ತಾಳ
ಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ|
ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ |
ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕಿತೆ ನಿನಗೆ ಕಂದಯ್ಯ
ಬಾಲಕತನದಲ್ಲಿ ಗೋ | ಪಾಲರೊಡಗೂಡಿ ಮುಂದೆ ಓದಿ »
ಚೋರಗೆ ಚಂದ್ರೋದಯ..........
ಈ ಉಗಾಭೋಗವನ್ನು ಶ್ರೀ ವಿದ್ಯಾಭೂಷಣರು ಪಂತುವರಾಳಿ ರಾಗದಲ್ಲಿ ಹಾಡಿದ್ದಾರೆ.
ಚೋರಗೆ ಚಂದ್ರೋದಯ ಸೊಗಸುವುದೇ
ಜಾರಗೆ ಸೂರ್ಯೋದಯ ಸೊಗಸುವುದೇ
ಶ್ರೀ ರಮಣನ ಕಥೆಯು ಕಳ್ಳಗೆ ಮೆಚ್ಚುವುದೇ|
ನಾರಿಗೆ ನಯವಿಲ್ಲದ ಚೆಲುವಿಕೆಯು
ಹರಿಸ್ಮರಣವಿಲ್ಲದ ಹಾಡಿಕೆಯು ಮುಂದೆ ಓದಿ »
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?
ಪಲ್ಲವಿ :
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?
ಅನುಪಲ್ಲವಿ:
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು
ಚರಣ:
1: ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ ಮುಂದೆ ಓದಿ »
ಘಟಿಕಾಚಲದಿ ನಿಂತ ಶ್ರೀ ಹನುಮಂತ
ಘಟಿಕಾಚಲದಿ ನಿಂತ ಶ್ರೀ ಹನುಮಂತ
ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||
ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ
ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧|| ಮುಂದೆ ಓದಿ »
ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು
ಪಲ್ಲವಿ:
ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು
ಚರಣಗಳು:
ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು
ಮಾತೆಗೆ ಉಂಗುರ ಕೊಡಲುಬೇಕು
ಪಾತಕಿ ರಾವಣನ ಶಿರವನಳಿಯಲುಬೇಕು
ಸೀತೆಪತಿ ರಾಮನಿಗೆ ನಮಿಸಬೇಕು
ಇಂತು ಕಳೆಯಲು ಬೇಕು ಅಜ್ಞಾತವಾಸವನು ಮುಂದೆ ಓದಿ »
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ||
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||
ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ|
ಕಂಗಳ ಪಾಪವ ಪರಿಹರಿಸುವ ಮುದ್ದು ಮುಂದೆ ಓದಿ »
ಬಾರೈ ಬಾರೈ ಭಾರತಿ ಮನೋಹರ
ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ || ಪಲ್ಲವಿ ||
ಪವನದೇವ ಬಾರೊ
ಪವಿಸಮಗಾತ್ರ ಬಾರೊ
ರವಿಜನ ಭವಭಯಹರ
ಪಾವನ ಮೂರುತಿ || ೧ ||
ಮಧ್ವಮುನಿಯೆ ಬಾರೊ
ಉದ್ಧರಿಸಲು ಬಾರೊ
ಶುದ್ಧ ಮುಕುತಿದಾತ
ದದ್ಧಲಪುರವಾಸ || ೨ ||
ಗಂಧವಾಹನ ಬಾರೊ
ಸಿಂಧುಬಂಧನ ಬಾರೊ
ಮಂಧರೋದ್ಧರ ಶಾಮ
ಈತ ಮುಖ್ಯ ಪ್ರಾಣನಾಥ
ರಾಗ ಬೇಹಾಗ್/ಅಟ್ಟ ತಾಳ
ಈತ ಮುಖ್ಯ ಪ್ರಾಣನಾಥ || ಪಲ್ಲವಿ ||
ಈತ ಶ್ರೀ ರಾಮ ಸೇವಕನೆನಿಸಿದಾತ || ಅನು ಪಲ್ಲವಿ ||
ಭಾನುವಿನ ತುಡಿಕಿದಾತ ಭಾರತಕೆ ಬಂದಾತ
ವಾನರೋತ್ತಮ ಹನುಮ ಹರಿಶರಣನೀತ || ೧ ||
ವಾರಿಧಿಯ ನೆಗೆದಾತ ವನಚರಾಗ್ರೇಸರನೀತ ಮುಂದೆ ಓದಿ »
ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ರಾಗ ಸೌರಾಷ್ಟ್ರ/ಅಟ್ಟ ತಾಳ
ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||
ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ ||
ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ ಮುಂದೆ ಓದಿ »
ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ
ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು. ಮುಂದೆ ಓದಿ »
ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.
ಯುಗ ಯುಗಗಳಿಂದ ಗಾಢ-ಗೂಢವಾಗಿಯೇ ಉಳಿದ ಸಂಸ್ಕೃತದ ಮಹಾಮಂತ್ರಗಳನ್ನು, ಘನ ವಿಚಾರಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಹಾಡು ಹೇಳುವ ಸಂಪ್ರದಾಯವನ್ನು ಶ್ರೀಪಾದರಾಜರು ವ್ಯಾಪಕವಾಗಿ ಪ್ರಾರಂಭಿಸಿದರು. ಮುಂದೆ ಓದಿ »
ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ
ಹರಿದಾಸರ ಮೂಲಸ್ಪೂರ್ತಿ ಪುರುಷ ಮಧ್ವಾಚಾರ್ಯರು. ಕೃಷ್ಣಾ ಎಂದು ಉಡುಪಿ ಶ್ರೀಕೃಷ್ಣನನ್ನು ತೋಳ್ತಕ್ಕೆಯಲ್ಲಿ ಬಿಗಿದಪ್ಪಿದ ಇವರ ಭಕ್ತಿಯನ್ನು ಕಂಡು ನಂತರದ ಹರಿದಾಸರೆಲ್ಲರೂ ಶ್ರೀಕೃಷ್ಣನ ಭಕ್ತಿಯೆಂಬ ಪ್ರೀತಿಯ ಮಹಾಪೂರವನ್ನೇ ಹರಿಸಿದರು. ಮುಂದೆ ಓದಿ »
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ || ಪಲ್ಲವಿ ||
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕುಟಕಾಣಿಸ ಬಂದು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯಾ ಮನುಜ || ೧ || ಮುಂದೆ ಓದಿ »
ಸಾರಿ ಬಂದನೆ ಪ್ರಾಣೇಶ ಬಂದನೆ
ರಾಗ ಹಿಂದೂಸ್ಥಾನಿ ಕಾಪಿ/ಅಟ್ಟ ತಾಳ
ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||
ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||
ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ || ಮುಂದೆ ಓದಿ »
ನೋಡಿರಯ್ಯ ಹನುಮಂತನ ಮಹಿಮೆಯ
ರಾಗ ಶಂಕರಾಭರಣ/ಚಾಪು ತಾಳ
ನೋಡಿರಯ್ಯ ಹನುಮಂತನ ಮಹಿಮೆಯ
ಬೇಡಿರೋ ವರಗಳನು || ಪಲ್ಲವಿ ||
ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ ||
ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ ಮುಂದೆ ಓದಿ »
