ಪ್ಲಾನೆಟ್ ಕನ್ನಡ

Saturday, 17th May 2008

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್  ಮುಂದೆ ಓದಿ »

Source: Sampada - ಸಂಪದ - 08:47

ಕೆಲಸಕ್ಕೊಂಟಾಳ್

ಕೆಲಸಕ್ಕೊಂಟಾಳ್ ನನ್ನಾಕಿ
ಮನೇಲ್ ಮಂದೀನ್ ಕೂಡಾಕಿ
ಗಡಿಬಿಡೀಲ್ ಮುಂಜಾನೇಳ್ತಾಳೆ
ಪಟಾಪಟ್ ತಯಾರಾಗ್ತಾಳೆ

ಬ್ರೆಡ್ ಟೋಸ್ಟ್, ಅಮ್ಲೆಟ್, ಹನಿ,
ಜಾಮ್, ಚೀಝ್, ಬಟರ್ ಕೊಟ್ಟು
ಮಗೂಗ್ ಹಾರ್ಲಿಕ್ಸ್ ಮರೀಬೇಡಿ
ಸ್ಕೂಲಿಗ್ ಡಬ್ಬಿ ತಯಾರ್ ಮಾಡಿ

ಇಡ್ಲಿ ಚಟ್ನಿ, ದೋಸೆ, ಉಪ್ಪಿಟ್ಟು
ನನ್ನಮ್ಮಾಗಿಷ್ಟ, ಸಿಗೋದ್ ಕಷ್ಟ
ರಾತ್ರಿ ಮಾಡಿದ್ ಸಾಂಬಾರನ್ನೇ
ಮಧ್ಯಾನ್ಹಕ್ಕೆ ಅಡ್ಜಸ್ಟ್ ಮಾಡ್ಕೊಳ್ಳಿ

ಟಾಟಾ ಬೈ ಬೈ ಚಿನ್ನೂಗ್ಹೇಳಿ <
Source: ಕೂಗು - 06:41

ಕದಬಾಗಿಲಿರಿಸಿದ ಕಳ್ಳ ಮನೆ ಇದು…

‘ಅಲ್ಲಿದೆ ನಮ್ಮ ಮನೆ’ ಬ್ಲಾಗ್ ನಲ್ಲಿ ನೀಲಾಂಜನರ ಒಂದು ಮೆಲುಕು ತೆಗೆದು ಹಾಕಿದ್ದೇ ತಡ ‘ಅವಧಿ’ಗೆ ಪ್ರತಿಕ್ರಿಯೆಗಳು ಸಾಲಾಗಿ ಹರಿದು ಬಂದಿದೆ. ‘ನೀಲಾಂಜನ’ ಯಾರು? ‘ಅಲ್ಲಿದೆ ನಮ್ಮ ಮನೆ…’ಹುಟ್ಟಿದ್ದು ಹೇಗೆ..? ಎಂಬ ಕುತೂಹಲ ಎಲ್ಲರಲ್ಲೂ. ಅದಕ್ಕೆ ಇಲ್ಲಿದೆ ಉತ್ತರ. ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ! ***   ಅವಧಿಯ ಕಾರಣಿಕರಿಗೆ,   ಇವತ್ತು ಅವಧಿಯನ್ನು ತೆರೆದು ನೋಡಿದರೆ, ಎದುರು ನೋಡಿರದಿದ್ದ, ನನ್ನ ಬರಹವೇ ಕಾಣಿಸಿಕೊಳ್ಳಬೇಕೆ!  ನೂರು
Source: ಅವಧಿ - 04:43

ಓಟು ಹಾಕದಿರುವುದೂ ಪ್ರಜಾಪ್ರಭುತ್ವ!

ಚುನಾವಣೆಗಳು ಹತ್ತಿರ ಬಂದಾಗಲೆಲ್ಲಾ ಮತದಾನ ಎಷ್ಟು ಮುಖ್ಯ ಎಂಬುದರ ಕುರಿತ ಪ್ರಚಾರ ಆರಂಭವಾಗುತ್ತದೆ. ಒಂದೇ ಒಂದು ಓಟು ಯಾವ ಬದಲಾವಣೆಯನ್ನು ತರಬಲ್ಲದು ಎಂಬುದರ ಬಗ್ಗೆ ಮಾಧ್ಯಮಗಳು ಹೇಳುತ್ತವೆ. ಮತದಾನದ ದಿನವಿಡೀ ಮಾಧ್ಯಮಗಳು ಮತದಾನದ ಪ್ರಮಾಣದ ಮೇಲೆ ಕಣ್ಣಿರಿಸಿ ಚರ್ಚೆಗಳನ್ನು ನಡೆಸುತ್ತವೆ. ನಿರ್ದಿಷ್ಟ ಪ್ರದೇಶದಲ್ಲಿ ಏಕೆ ಮತದಾನ ಕಡಿಮೆಯಾಯಿತು ಎಂಬುದರ ಬಗ್ಗೆ ಕೂದಲು ಸೀಳುವ ಕೆಲಸವೂ ನಡೆಯುತ್ತದೆ.

ಭಾರತದ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕಂಡು

Source: N A M Ismail - 03:48

ಘೃತಮುಮಂ ತೈಲಮುಮಂ

ಸಕ್ಕದಮಂ ಪೇಱ್ವೊಡೆ ನೆೞೆ
ಸಕ್ಕದಮಂ ಪೇಱ್ಗೆ ಸುದ್ದಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ
...............ನಯಸೇನ "ಧರ್ಮಾಮೃತ"

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ  ಮುಂದೆ ಓದಿ »

Source: Sampada - ಸಂಪದ - 03:02

ಕರ್ನಾಟಕದ `ಪವರ್‌ ಪಾಲಿಟಿಕ್ಸ್‌'

ಆರು ವರ್ಷಗಳ ಹಿಂದಿನ ಸಂಗತಿಯಿದು. ಆ ಹೊತ್ತಿಗಾಗಲೇ ಎರಡೆರಡು ಬಾರಿ ಎಸ್‌.ಎಂ.ಕೃಷ್ಣರನ್ನು ಭಾರತದ ನಂಬರ್‌ ಒನ್‌ ಮುಖ್ಯಮಂತ್ರಿಯಾಗಿ `ಇಂಡಿಯಾ ಟುಡೇ' ಗುರುತಿಸಿತ್ತು. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರನ್ನು ಹಿಂದಿಕ್ಕಿ ಕೃಷ್ಣ `ಸುಧಾರಣೆ'ಯ ಹಾದಿಯಲ್ಲಿ ಸಾಗುತ್ತಿದ್ದರು. ಈ ಸಮಯದಲ್ಲೇ ಕರ್ನಾಟಕದ ವಿದ್ಯುತ್‌ ನಿಗಮ ಮತ್ತು ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮಗಳು ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿತ್ತು. ಅಲ್ಲಿ ಎಸ್‌.ಎಂ.ಕ

Source: N A M Ismail - 03:00

Friday, 16th May 2008

ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....

ಮೊನ್ನೆಯಿನ್ನೂ ಮೊಝಿಲ್ಲಾ ಫೈರ್ ಫಾಕ್ಸ್ 3 ಬೀಟಾ 5 ಅಳವಡಿಸಿಕೊಂಡೆ. ಯಾಕೋ ಅದಕ್ಕೆ ಪ್ರಜಾವಾಣಿ ಈ ಪೇಪರ್ನ ಕಂಡ್ರೆ ಆಗಲ್ಲ ಅಂತ ಕಾಣತ್ತೆ. ಈ ಪೇಪರ್ ನಲ್ಲಿ ಮೊದಲ ಕಾಲಂ ಕಾಣ್ಸೋದೇ ಇಲ್ಲ. ಬಲ ಮೂಲೆಯಲ್ಲಿರುವ ಹೆಡ್ ಲೈನ್ ಮತ್ತು ಆರ್ ಎಸ್ಎಸ್ ಫೀಡ್ ಮೊದಲ ಕಾಲಂನ ಮೇಲೆ ಬಂದು ಕೂತು ಬಿಡುತ್ತೆ. ಹೇಗೆ ತೆಗೆಯೋದು ದಯವಿಟ್ಟು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ.  ಮುಂದೆ ಓದಿ »

Source: Sampada - ಸಂಪದ - 22:09

ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !

ಇದು ಕನ್ನಡಿಗರಿಗೆಲ್ಲಾ ಬೇಳೆ ಹೋಳಿಗೆ, ಪಾಯಸ ತಿಂದಷ್ಟು ಸಂತಸದ ಸುದ್ದಿಯಲ್ಲವೇ ? ಸುನಿಲ್ ಮಲ್ಲೇನ ಹಳ್ಳಿಯವರ ದನಿಗೆ ಜೊತೆಗೂಡಿಸೋಣ ! ಅಂದಿನಿಂದ ಮೊದಲಿನಂತೆ ವಿಮಾನಗಳೆಲ್ಲಾ ಮುಂಬೈನಗರಕ್ಕೆ ಬಂದು ಅಲ್ಲಿಂದ ಮತ್ತೆ ಡೊಮೆಸ್ಟಿಕ್ ವಿಮಾನಯಾನವನ್ನು ಮುಂದುವರೆಸದೆ, ನೇರವಾಗಿ ಬೆಂಗಳೂರಿನಲ್ಲಿ ಬಂದಿಳಿಯುವ ಸನ್ನಿವೇಷವನ್ನು ಊಹಿಸಲೂ ಅಸಾಧ್ಯ !  ಮುಂದೆ ಓದಿ »

Source: Sampada - ಸಂಪದ - 19:02

ಪುಟ್ಟಿಯ ಕಥೆಗಳು


ಪುಟ್ಟಿ ಪುಟ್ಟನ ಕೈಹಿಡಿದು ನಿದ್ರೆ ಮಾಡ್ತಾ ಇದ್ಲು. ಪುಟ್ಟಿಯ ಮುಖವನ್ನೇ ಕಣ್ಣಲ್ಲಿ ತುಂಬಿಕೊಂಡ ಪುಟ್ಟ ನಿದ್ರೆ ಹೋಗಿದ್ದ. ನಿಧಾನಕ್ಕೆ ಪುಟ್ಟನ ಕೈಯಿಂದ ತನ್ನ ಕೈ ಕಳಚಿಕೊಂಡೆದ್ದ ಪುಟ್ಟಿ ಕಿಟಕಿಯಲ್ಲಿ ನಿಂತಿದ್ದಳು ಮರದಲ್ಲಿನ ಹಳದಿಯ ಹೂವುಗಳಿಂದ ನೆಲವನ್ನು ಮೆದುವಾಗಿ ಪುಟ್ಟನಿಗೆಚ್ಚರವಾಗದಂತೆ ಮುತ್ತಿಡುತ್ತಲಿದ್ದ ಮಳೆಹನಿಗಳನ್ನೇ ನೋಡುತ್ತಾ . ಪುಟ್ಟನ ನಿದ್ರೆಯೊಳಗಿಂದ ಹೊರಬರುತ್ತಿದ್ದ ಉಸಿರು ಪುಟ್ಟಿಯ ಮನದೊಳಕ್ಕಿಳಿದು ಪುಟ್ಟಿಯ ಮೌನಕ್

ಡಿ.ವಿ.ಜಿ ಯವರ "ವನಸುಮ"

ಚಿತ್ರದುರ್ಗದ ಓದುಗರಾದ ರಾಧಿಕಾ ಡಿ.ವಿ.ಜಿಯವರ ವನಸುಮ ಕವನದ ಪೂರ್ಣಪಾಠ ದೊರಕಿಸಿ ಕೊಟ್ಟಿದ್ದಾರೆ
ಧನ್ಯವಾದ ರಾಧಿಕ
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ
Source: ಮಾಲ ರಾವ್ - 17:44

ಸಹಬ್ಲಾಗಿಗರ ಬಾಲ ಲೀಲೆ



 ನನ್ನ ಬಾಲ್ಯಕಾಲದ ಒಂದಷ್ಟು ತಪ್ಪು ತಿಳುವಳಿಕೆಗಳನ್ನು ಪಟ್ಟಿ ಮಾಡಿದ್ದೇ ಒಂದಕ್ಕಿಂತ ಒಂದು ಸ್ವಾರಸ್ಯಕರವಾದ ಸಂಗತಿಗಳನ್ನು ಸಹಬ್ಲಾಗಿಗರು ಹಂಚಿಕೊಳ್ಳತೊಡಗಿದರು. ಅವೆಲ್ಲವೂ ಕಮೆಂಟ್ ಬಾಕ್ಸಿನಲ್ಲಿ ಕೂಡುವುದಕ್ಕಿಂತ ಇಲ್ಲಿ, ಹೀಗೇ ಚೆನ್ನ ಅನಿಸಿತು. ಅದಕ್ಕೇ…

Syndicate content